
ನಮ್ಮ ದಾವಣಗೆರೆ ಜ. 17: ಎಸ್ಪಿಎಸ್ ನಗರದ 8ನೇ ಕ್ರಾಸ್ ನಿವಾಸಿ ಮುಬೀನಾ ಬಾನು (35) ಳನ್ನು ಆಟೋ ರಿಕ್ಷಾ ಚಾಲಕ ನೂರ್ ಅಹಮ್ಮದ್ ಅಲಿಯಾಸ್ ಶಾರು (25) ಎಂಬಾತ 14ರಂದು ರಾತ್ರಿ 11ರ ವೇಳೆ ಹಣದ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ಮಾಡಿ, ಪ್ರಜ್ಞೆ ಕಳೆದುಕೊಂಡಿದ್ದ ಆಕೆಯನ್ನು ನೇಣು ಹಾಕಿ ಕೊಲೆ ಮಾಡಿದ ಆರೋಪಿಯನ್ನು 24 ಗಂಟೆಯಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Join Whatsapp Group NammaDavangere 04
Join Whatsapp Group NammaDavangere 05
ಆರೋಪಿ ನೂರ್ ಅಹಮ್ಮದ್ ಅಲಿಯಾಸ್ ಶಾರು, ಮುಬೀನಾಬಾನುಳನ್ನು ಕೋಣೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾನೆ, ಆಕೆ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾಳೆ. ಬಳಿಕ ಮನೆಯ ಮೇಲ್ಚಾವಣಿಯ ಕಬ್ಬಿಣದ ಹುಕ್ಕಿಗೆ ನೇಣು ಹಾಕಿದ್ದಾನೆ.
ಎಸ್ಪಿ ಉಮಾ ಪ್ರಶಾಂತ, ಡಿವೈಎಸ್ಪಿ ಮಲ್ಲೇಶ ದೊಡ್ಮನಿ, ಎಎಸ್ಪಿ ವಿಜಯಕುಮಾರ, ಮಾರ್ಗದರ್ಶನದಲ್ಲಿ ಆಜಾದ್ ನಗರ ವೃತ್ತ ನಿರೀಕ್ಷಕ ಎಸ್.ಬಾಲಚಂದ್ರ ನಾಯ್ಕ, ಎಸ್ಐ ಲಲಿತಮ್ಮ, ಎಎಸ್ಐ ಮಹಮ್ಮದ್ ಖಾನ್, ಸಿಬ್ಬಂದಿ ವರ್ಗದವರು ಒಳಗೊಂಡ ತಂಡವು ಆರೋಪಿ ನೂರ್ ಅಹಮ್ಮದ್ ಅಲಿಯಾಸ್ ಶಾರುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.