ಕರ್ನಾಟಕ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿವರಾಮ್ ಹಾಗೂ ಬೇಬಿ ಇವರ ಮಗನಾದ ಮಂಜು ಮಗವೀರ್, ಪಧವೀಧರರಾದ ಇವರು ದಾವಣಗೆರೆಯಲ್ಲಿ ಸುಮಾರು 25 ವರ್ಷಗಳಿಂದ ನೆಲೆಸಿರುತ್ತಾರೆ. ದೇಹಧಾಡ್ಯ ಸ್ಪರ್ಧೆಯಲ್ಲಿ ತಮ್ಮ ಶ್ರಮ ಮತ್ತು ಅಚ್ಚುಕಟ್ಟಾದ ತರಬೇತಿಯ ಮೂಲಕ ಹಲವು ಮಹತ್ವದ ಪ್ರಶಸ್ತಿಗಳನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ.
2015ರಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ಅಖಿಲ ಭಾರತೀಯ ಯುನಿವರ್ಸಿಟಿ ಚಾಂಪಿಯನ್ಶಿಪ್ನಲ್ಲಿ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ. ನಂತರ 2016ರಲ್ಲಿ ಹಾಂಗ್ಕಾಂಗ್ನಲ್ಲಿ ನಡೆದ ಮಿಸ್ಟರ್ ಒಲಿಂಪಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ 6ನೇ ಸ್ಥಾನವನ್ನು ಪಡೆದಿದ್ದಾರೆ. ಅದೇ ವರ್ಷ 2016ರಲ್ಲಿ ಕೇರಳದಲ್ಲಿ ನಡೆದ ಜೂನಿಯರ್ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಫ್ ದಿ ಚಾಂಪಿಯನ್ ಆಗಿರುತ್ತಾರೆ.
ಇವರ ಅತ್ಯದ್ಭುತ ಸಾಧನೆಗಳಲ್ಲಿ ಒಂದಾದ 2018ರಲ್ಲಿ ಛತ್ತೀಸ್ಗಢದಲ್ಲಿ ನಡೆದ ಜೂನಿಯರ್ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲನೇ ಸ್ಥಾನ ಪಡೆದು ಚಾಂಪಿಯನ್ ಆಫ್ ದಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದು.
2013, 2014 ಮತ್ತು 2015ರಲ್ಲಿ ಭಾರತ ಉದಯ, ಭಾರತ ಕಿಶೋರ ಹಾಗೂ ಭಾರತ ಶ್ರೇಷ್ಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
2023ರಲ್ಲಿ ಬೆಳಗಾವಿಯಲ್ಲಿ ನಡೆದ ಸತೀಶ್ ಶುಗರ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಇದೆ ವರ್ಷ 2026 ರಲ್ಲಿ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಂತ 17ನೇ ಸೀನಿಯರ್ ಮಿಸ್ಟರ್ ಇಂಡಿಯಾ ದೇಹಧಾಡ್ಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದು ನಮ್ಮ ದಾವಣಗೆರೆ ಜಿಲ್ಲೆಗೆ ಹಾಗೂ ಕರ್ನಾಟಕಕ್ಕೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ. ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ತರಬೇತಿ ನೀಡುತ್ತಿರುವ ಇವರು, ಸರಿ ಸುಮಾರು 380 ಕ್ರೀಡಾಪಟುಗಳ ಪೈಕಿ ಮಂಜು ಮಗವೀರ್ ಎರಡನೇ ಸ್ಥಾನವನ್ನು ಪಡೆದು ಕರ್ನಾಟಕ ಇತಿಹಾಸದಲ್ಲೇ ಹೊಸ ಅಧ್ಯಾಯವನ್ನು ಬರೆದಿರುತ್ತಾರೆ.
ಮಂಜು ಮಗವೀರ್ ರವರು ಸರ್ಕಾರಕ್ಕೆ ಕೇಳಿಕೊಳ್ಳುವುದೇನೆಂದರೆ ನಮ್ಮಂಥಹ ಅನೇಕ ಕ್ರೀಡಾಪಟುಗಳಿಗೆ ಒಳ್ಳೆಯದಾಗಬೇಕು ಹಾಗೂ ಅವರಿಗೆ ಸರ್ಕಾರದಿಂದ ಏನಾದರೊಂದು ಸಹಾಯ ಬೇಕು ಎಂಬುದಾಗಿದೆ. ದೇಹಧಾಡ್ಯ ಎಂಬುದು ಬಹಳ ಕಷ್ಟ ಮತ್ತು ದುಬಾರಿ ವೆಚ್ಚದ ಕ್ರೀಡೆ. ಕರ್ನಾಟಕದಿಂದ ನಾನು ಮೊದಲ ಭಾರಿ ಈ ಸಾಧನೆ ಮಾಡಿದ್ದೇನೆ ಹಾಗಾಗಿ ಕ್ರೀಡಾ ಸಚಿವರು ಇದನ್ನು ಪರಿಗಣಿಸಬೇಕು ಮತ್ತು ನಮಗೆ ಪ್ರಾಯೋಜಕತ್ವ ಕೊಡುವಂತೆ ಆಗಬೇಕು, ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ನಮ್ಮ ರಾಜ್ಯ ದೇಹಧಾಡ್ಯ ಪಟುಗಳಿಗೆ ಹೇಳಿಕೊಳ್ಳುವಂತ ಸಹಾಯ ಮಾಡುತ್ತಿಲ್ಲ ಎಂದಿದ್ದಾರೆ. ಸ್ವಲ್ಪ ಸರ್ಕಾರ ನಮ್ಮಂತಹ ದೇಹಧಾಡ್ಯ ಪಟುಗಳಿಗೆ ಸಹಾಯ ಮಾಡಿದ್ದಲ್ಲಿ ನಮ್ಮ ಜಿಲ್ಲೆ ಮತ್ತು ರಾಜ್ಯದ ಹೆಸರನ್ನು ಇನ್ನೂ ಎತ್ತರಕೆ ತೆಗೆದುಕೊಂಡು ಹೋಗಲು ನಮಗೆ ಸಹಾಯವಾಗುತ್ತದೆ ಎಂದು ಕೇಳಿಕೊಂಡಿದ್ದಾರೆ.
ಇವರ ಸಾಧನೆ, ಶಿಸ್ತು ಮತ್ತು ಸಮಾಜದ ಬಗ್ಗೆ ಇರುವ ಕಾಳಜಿ, ಯುವಕರಿಗೆ ಪ್ರೇರಣೆಯಾಗಿದ್ದು, ತಮ್ಮ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ತಂದಿದೆ. ಮಂಜು ಮಗವೀರ್ ರವರಿಗೆ ಅವರ ತಂದೆ, ತಾಯಿ, ದಾವಣಗೆರೆ ಅಸೋಸಿಯೇಷನ್, ಇವರ ಗೆಳೆಯರ ಬಳಗ ಹಾಗೂ ಇವರ ಧರ್ಮಪತ್ನಿ ಸೀಮಾ ರವರು ಸ್ಫೂರ್ತಿಯಾಗಿದ್ದಾರೆ.




