₹3.75 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ನೋಟು ವಶ, ಪೊಲೀಸರಿಂದ ಕಾರ್ಯಾಚರಣೆ
ದಾವಣಗೆರೆ, ಜುಲೈ 24:
ಜಿಲ್ಲೆಯಲ್ಲಿ ಖೋಟಾ ನೋಟು ಚಲಾವಣೆ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಬಸವಾಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ₹3,75,400 ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು:
- ಸಂತೋಷಕುಮಾರ (32)
- ವಿರೇಶ್ ಬಿ.ಪಿ (37)
- ಕುಬೇರಪ್ಪ (62)
- ಹನುಮಂತಪ್ಪ (75)
ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಇಬ್ಬರು ಖೋಟಾ ನೋಟು ಚಲಾವಣೆ ಮಾಡುತ್ತಿದ್ದರೆಂದು ಖಚಿತ ಮಾಹಿತಿ ಪಡೆದ ಬಸವಾಪಟ್ಟಣ ಠಾಣೆ ಪೊಲೀಸರು ಜುಲೈ 19ರ ಶನಿವಾರ ದಾಳಿ ನಡೆಸಿ, ಸಂತೋಷಕುಮಾರ್ ಮತ್ತು ವಿರೇಶ್ ಬಿ.ಪಿಯನ್ನು ಬಂಧಿಸಿದ್ದಾರೆ.
Join Whatsapp Group NammaDavangere 04
Join Whatsapp Group NammaDavangere 05
ಅವರಿಂದ ₹500 ಮುಖಬೆಲೆಯ ನೋಟುಗಳು ಹಾಗೂ ದುಷ್ಕೃತ್ಯದಲ್ಲಿ ಬಳಸಿದ KA-27-Q-1629 ಬೈಕ್ ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಕಬ್ಬಳ ಗ್ರಾಮದ ಕರೆಕಟ್ಟೆ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ, ಕುಬೇರಪ್ಪ ಹಾಗೂ ಹನುಮಂತಪ್ಪರನ್ನು ಬಂಧಿಸಿದ್ದಾರೆ. ಇವರಿಂದ ₹500 ಮತ್ತು ₹200 ಮುಖಬೆಲೆಯ ಹೆಚ್ಚುವರಿ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಬೇರಪ್ಪನ ಕುಕ್ಕವಾಡ ಮನೆಯ ಮೇಲೆ ದಾಳಿಮಾಡಿ ₹500 ಮುಖಬೆಲೆಯ ಹೆಚ್ಚಿನ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

📁 ಹಿಂದಿನ ಪ್ರಕರಣಗಳ ಸಂಪರ್ಕ
ಬಸವಾಪಟ್ಟಣ ಪೊಲೀಸರ ಪ್ರಕಾರ, ಆರೋಪಿ ಕುಬೇರಪ್ಪನ ವಿರುದ್ಧ:
ಹರಿಹರ ನಗರ ಠಾಣೆ (ದಾವಣಗೆರೆ) – 1 ಪ್ರಕರಣ
ಹೊಸಪೇಟೆ ನಗರ ಠಾಣೆ (ವಿಜಯನಗರ) – 1 ಪ್ರಕರಣ
ಮೈಸೂರು ಜಿಲ್ಲೆಯಲ್ಲಿ – 1 ಪ್ರಕರಣ
ಒಟ್ಟು 3 ಖೋಟಾ ನೋಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

⚖️ ಕಾನೂನು ಕ್ರಮ
ಬಂಧಿತ ಎಲ್ಲಾ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರೆದಿದೆ.
📝 ಸಂಪಾದಕೀಯ ಟಿಪ್ಪಣಿ:
ಖೋಟಾ ನೋಟು ಚಲಾವಣೆಯಂತಹ ಆರ್ಥಿಕ ಅಪರಾಧಗಳು ದೇಶದ ಆರ್ಥಿಕ ಸ್ಥಿರತೆಯನ್ನು ಹದಗೆಡಿಸುತ್ತದೆ ಮತ್ತು ಕಾನೂನಿನ ಪ್ರಕಾರ ಮಹಾ ಅಪರಾದವಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ನೋಟುಗಳ ಪರಿಶೀಲನೆ ಮಾಡುವುದು ಮತ್ತು ಅನುಮಾನಾಸ್ಪದ ಚಲಾವಣೆ ಕಂಡುಬಂದರೆ ತಕ್ಷಣವೇ ಸ್ಥಳೀಯ ಠಾಣೆಗೆ ಮಾಹಿತಿ ನೀಡುವುದು ಬಹುಮುಖ್ಯವಾಗಿದೆ.





