ದಾವಣಗೆರೆ (ಜುಲೈ 30): ನಗರದಲ್ಲಿ ಮಾದಕ ವಸ್ತುಗಳ ಕಾನೂನುಬಾಹಿರ ಬಳಕೆ, ಸಾಗಾಟ ಮತ್ತು ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ, ದಾವಣಗೆರೆ ನಗರ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ ಕೈಗೊಂಡಿದೆ. ನಗರದಲ್ಲಿರುವ ಎಲ್ಲಾ ದರ್ಗಾ ಮತ್ತು ಮಸೀದಿಗಳ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ, ಯುವಕರು ಮಾದಕ ವಸ್ತುಗಳಿಂದ ದೂರವಿರುವಂತೆ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಮಾತನಾಡಿ, “ಮಾದಕ ವಸ್ತುಗಳ ಸೇವನೆ” ಯುವಕರ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬದುಕಿಗೆ ಅಪಾರ ನಷ್ಟ ತರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸಮುದಾಯ ಮುಖಂಡರು ತಮ್ಮದೇ ಆದ ಜವಾಬ್ದಾರಿಯೊಂದಿಗೆ ಜಾಗೃತಿ ಮೂಡಿಸಲು ಮುಂಚೂಣಿಯಲ್ಲಿರಬೇಕು,” ಎಂದು ತಿಳಿಸಿದರು.
ಯುವಕರಿಗೆ ಜಾಗೃತಿ ಮೂಡಿಸಲು ವಿಶೇಷ ಮಾರ್ಗದರ್ಶನ:
- ಪ್ರಾರ್ಥನೆಯ ಸಂದರ್ಭದಲ್ಲಿ ಮಾದಕ ವಸ್ತುಗಳ ವಿರುದ್ಧ ಮುಖಂಡರು ಯುವಜನತೆಗೆ ತಿಳಿಹೇಳಬೇಕು.
- ಯುವ ಸಮೂಹದಲ್ಲಿ ಉಚಿತ ಜಾಗೃತಿ ಕಾರ್ಯಕ್ರಮಗಳು ನಡೆಸಬೇಕು.
- ಮಕ್ಕಳ ಪೋಷಕರಿಗೂ ಮಾಹಿತಿ ನೀಡಿ, ಮನೆಯ ಮಟ್ಟದಲ್ಲಿಯೇ ಜಾಗೃತಿ ಆರಂಭಿಸಬೇಕು.
ಸಮುದಾಯದ ಪ್ರತಿಕ್ರಿಯೆ:
ಸಭೆಯಲ್ಲಿ ಪಾಲ್ಗೊಂಡ ಕೆಲವು ಸಮುದಾಯ ಮುಖಂಡರು, “ಇದು ಸಕಾಲಿಕ ಒಳ್ಳೆಯ ಕ್ರಮ”. ನಾವು ಯುವ ಸಮುದಾಯದ ಭವಿಷ್ಯವನ್ನು ರಕ್ಷಿಸಲು ಸದಾ ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.




