ಕೊಂಡಜ್ಜಿ ಕೆರೆಯನ್ನು ಪ್ರವಾಸಿ ತಾಣವಾಗಿಸಲು ಕ್ರಮ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ನಮ್ಮ ದಾವಣಗೆರೆ ಏ.06: ಜಿಲ್ಲೆಯಲ್ಲಿನ ಆರು ತಾಲ್ಲೂಕಿನಲ್ಲಿನ ಪ್ರಮುಖ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಪ್ರವಾಸಿ ತಾಣಗಳಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಅವರು ಶನಿವಾರ ಕೊಂಡಜ್ಜಿ ಕೆರೆಯಲ್ಲಿ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆ ಹಾಗೂ ಬಾಲಕಿಯರಿಗೆ ಏರ್ಪಡಿಸಲಾದ ಜಲಸಾಹಸ ಕ್ರೀಡೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದರು.

Join Whatsapp Group NammaDavangere 04
Join Whatsapp Group NammaDavangere 05

ಮಹಿಳಾ ದಿನಾಚರಣೆಯ ಪ್ರಯುಕ್ತ ಕೆರೆಯಲ್ಲಿ ಮಹಿಳೆಯರಿಗಾಗಿ ಏಪ್ರಿಲ್ 7 ರವರೆಗೆ ಉಚಿತವಾಗಿ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯು ಕ್ರೀಡೆಗೆ ಪ್ರಸಿದ್ದಿ. ಹಾಗಾಗಿ ಮಹಿಳೆಯರನ್ನು ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ದೃಷ್ಟಿಯಿಂದ ಇದನ್ನು ಪ್ರವಾಸಿ ತಾಣವಾಗಿಸಿ, ವಿವಿಧ ರೀತಿಯ ಜಲ ಸಾಹಸ ಕ್ರೀಡೆಗಳ ತರಬೇತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಅಷ್ಟೇ ಅಲ್ಲದೇ ಮಹಿಳಾ ದಿನಾಚರಣೆಯ ಪ್ರಯುಕ್ತ ಸ್ಪರ್ಧೆಗಳನ್ನು ಆಯೋಜಿಸಿ, ಸ್ಪರ್ಧೆಯಲ್ಲಿ ಜಯಗಳಿಸಿದ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಜಿಲ್ಲೆಯ ಚನ್ನಗಿರಿ, ಹರಿಹರ ಮುಂತಾದ ಕ್ಷೇತ್ರಗಳಲ್ಲಿನ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿ ತಾಣಗಳನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಜಲ ಸಹಾಸ ಕ್ರೀಡೆಯಲ್ಲಿ ಭಾಗವಹಿಸದ ಸಂತೋಷದ ಕ್ಷಣ ಹಾಗೂ ಅನುಭವಗಳ ಕುರಿತು ಮಾಹಿತಿ ಪಡೆದರು. ನಾನು ಹುಟ್ಟಿದ ಗ್ರಾಮ ಕಕ್ಕರಗೊಳ್ಳವಾಗಿದ್ದು ತಾಲ್ಲೂಕು ಮಟ್ಟದ ಸ್ಕೌಟ್ಸ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಕೊಂಡಜ್ಜಿಯಲ್ಲಿ ಭಾಗವಹಿಸಲಾಗಿತ್ತು. ಕೊಂಡಜ್ಜಿ ಕರೆಯಲ್ಲಿ ಜಲಸಾಹಸ ಕ್ರೀಡೆಗಳ ತರಬೇತಿಯನ್ನು ನೀಡಲು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ವೇಳೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾ, ತರಬೇತುದಾರ ಶಬ್ಬೀರ್ ಹಾಗೂ ವಿದ್ಯಾಥಿಗಳು ಭಾಗವಹಿಸಿದ್ದರು.

Related Posts

ಆಟೋರಿಕ್ಷಾಗಳಿಗೆ ಮೀಟರ್ ಮತ್ತು ಡಿಸ್ಪ್ಲೇ ಬೋರ್ಡ್ ಕಡ್ಡಾಯ.

ನಮ್ಮ ದಾವಣಗೆರೆ ಮೇ. 23: ನಗರದಲ್ಲಿನ ಆಟೋ ಚಾಲಕರಿಗೆ ಮೀಟರ್ ಮತ್ತು ಡಿಸ್ಪ್ಲೇ ಬೋರ್ಡ್ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಆಟೋ ಚಾಲಕ ಸಂಘದ ಅಧಿಕಾರಿಗಳಿಗೆ ಸೂಚನೆ ನೀಡಿದರು. Join Whatsapp Group NammaDavangere 04Join Whatsapp Group NammaDavangere…

ಸಣ್ಣ ಪುಟ್ಟ ವಿಷಯಗಳಿಗೂ ಸಾರ್ವಜನಿಕರು ಲೋಕಾಯುಕ್ತಕ್ಕೆ ಬರುವುದು ಸರಿಯಲ್ಲ: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ

ದಾವಣಗೆರೆ ಏ. 24: ಸಣ್ಣ ಪುಟ್ಟ ವಿಷಯಗಳಿಗೂ ಸಾರ್ವಜನಿಕರು ಲೋಕಾಯುಕ್ತಕ್ಕೆ ಬರುವುದು ಸರಿಯಲ್ಲ. ಅಧಿಕಾರಿಗಳು ತಮ್ಮ ಕೆಲಸಗಳನ್ನು ಆತ್ಮಶ್ರದ್ಧೆಯಿಂದ ನಿರ್ವಹಿಸಬೇಕು. ಹಲವು ಕಚೇರಿಗಳಿಗೆ ಭೇಟಿ ನೀಡಿದ ವೇಳೆ ಸಾಕಷ್ಟು ಲೋಪದೋಷಗಳು ಕಂಡು ಬಂದಿವೆ. ಒಮ್ಮೆ ನಾನು ತೀರ್ಪು ಬರೆಯಲು ಪೆನ್ನು ಹಿಡಿದರೆ,…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 14 ಜೂನ್ 2025

  • By admin
  • June 13, 2025
  • 25 views
ಶನಿವಾರದ ರಾಶಿ ಭವಿಷ್ಯ 14 ಜೂನ್ 2025

ಶುಕ್ರವಾರದ ರಾಶಿ ಭವಿಷ್ಯ 13 ಜೂನ್ 2025

  • By admin
  • June 13, 2025
  • 32 views
ಶುಕ್ರವಾರದ ರಾಶಿ ಭವಿಷ್ಯ 13 ಜೂನ್ 2025

ಗುರುವಾರದ ರಾಶಿ ಭವಿಷ್ಯ 12 ಜೂನ್ 2025

  • By admin
  • June 11, 2025
  • 46 views
ಗುರುವಾರದ ರಾಶಿ ಭವಿಷ್ಯ 12 ಜೂನ್ 2025

ಬುಧವಾರದ ರಾಶಿ ಭವಿಷ್ಯ 11 ಜೂನ್ 2025

  • By admin
  • June 10, 2025
  • 50 views
ಬುಧವಾರದ ರಾಶಿ ಭವಿಷ್ಯ 11 ಜೂನ್ 2025

ಮಂಗಳವಾರದ ರಾಶಿ ಭವಿಷ್ಯ 10 ಜೂನ್ 2025

  • By admin
  • June 10, 2025
  • 69 views
ಮಂಗಳವಾರದ ರಾಶಿ ಭವಿಷ್ಯ 10 ಜೂನ್ 2025

ಸೋಮವಾರದ ರಾಶಿ ಭವಿಷ್ಯ 09 ಜೂನ್ 2025

  • By admin
  • June 8, 2025
  • 86 views
ಸೋಮವಾರದ ರಾಶಿ ಭವಿಷ್ಯ 09 ಜೂನ್ 2025

ಶನಿವಾರದ ರಾಶಿ ಭವಿಷ್ಯ 07 ಜೂನ್ 2025

  • By admin
  • June 6, 2025
  • 89 views
ಶನಿವಾರದ ರಾಶಿ ಭವಿಷ್ಯ 07 ಜೂನ್ 2025

ಶುಕ್ರವಾರದ ರಾಶಿ ಭವಿಷ್ಯ 06 ಜೂನ್ 2025

  • By admin
  • June 6, 2025
  • 99 views
ಶುಕ್ರವಾರದ ರಾಶಿ ಭವಿಷ್ಯ 06 ಜೂನ್ 2025

ಕಾಲಮಿತಿಯಲ್ಲಿ ನಗರೋತ್ಥಾನ ಕಾಮಗಾರಿಗಳು ಮುಗಿಯಬೇಕು.

  • By admin
  • June 5, 2025
  • 69 views
ಕಾಲಮಿತಿಯಲ್ಲಿ ನಗರೋತ್ಥಾನ ಕಾಮಗಾರಿಗಳು ಮುಗಿಯಬೇಕು.

ಗುರುವಾರದ ರಾಶಿ ಭವಿಷ್ಯ 05 ಜೂನ್ 2025

  • By admin
  • June 4, 2025
  • 109 views
ಗುರುವಾರದ ರಾಶಿ ಭವಿಷ್ಯ 05 ಜೂನ್ 2025
×