ನಮ್ಮ ದಾವಣಗೆರೆ, ಜುಲೈ 26 – ನಗರದ ಸಂಚಾರ ಪೊಲೀಸ್ ಇಲಾಖೆ ಕರ್ಕಶ ಧ್ವನಿ ಮಾಡುವ ಹಾರ್ನ್ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ವಿಶೇಷ ಕಾರ್ಯಾಚರಣೆ ನಡೆಸಿದೆ. ಧ್ವನಿ ಮಾಲಿನ್ಯ ತಡೆಗಟ್ಟುವುದು ಹಾಗೂ ಸಾರ್ವಜನಿಕರ ಆರೋಗ್ಯ ಹಾಗೂ ಶಾಂತಿಗೆ ಧಕ್ಕೆಯಾಗದಂತೆ ನಿಭಾಯಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯ ಸಂದರ್ಭಗಳಲ್ಲಿ ಅನಧಿಕೃತ ಹಾಗೂ ಧ್ವನಿಯ ಮಿತಿಯನ್ನು ಮೀರುವ ರೀತಿಯಲ್ಲಿ ಅಳವಡಿಸಲಾಗಿದ್ದ ಹಾರ್ನ್ಗಳನ್ನು ಹಲವು ದ್ವಿಚಕ್ರ ಹಾಗೂ ಆಟೋಗಳಿಂದ ಹಾರ್ನ್ತೆಗೆದು ಹಾಕಲಾಗಿದೆ. ಸಾರ್ವಜನಿಕರಿಗೆ ಇಂತಹ ಹಾರ್ನ್ಗಳು ಆರೋಗ್ಯಕ್ಕೆ ಹೇಗೆ ಹಾನಿಕಾರಕವಾಗುತ್ತವೆ ಎಂಬ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಬೃಹತ್ ಜಾಥಾ ಹಾಗೂ ಪೋಸ್ಟರ್ಗಳ ಮೂಲಕ ಮಾರ್ಗದರ್ಶನ ನೀಡಲಾಗಿದೆ.
Join Whatsapp Group NammaDavangere 04
Join Whatsapp Group NammaDavangere 05
ಸಂಚಾರ ಠಾಣಾಧಿಕಾರಿ ಎಚ್ಚರಿಕೆ ಸಂದೇಶ :
“ಧ್ವನಿಮಿತಿಯ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವಾಹನವನ್ನೂ ವಿನಾಯಿತಿ ಇಲ್ಲದೆ ಕ್ರಮಕ್ಕೆ ಒಳಪಡಿಸಲಾಗುತ್ತದೆ. ಕರ್ಕಶ ಹಾರ್ನ್ಗಳ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ, ಅಲ್ಲದೇ ಧ್ವನಿ ಮಾಲಿನ್ಯವು ಹೆಚ್ಚು ಆಗುತ್ತದೆ.”
ಮೂರು ಪ್ರಮುಖ ಉದ್ದೇಶಗಳು:
ಧ್ವನಿ ಮಾಲಿನ್ಯ ನಿಯಂತ್ರಣ.
ಸಾರ್ವಜನಿಕ ಶಾಂತಿ ಹಾಗೂ ಆರೋಗ್ಯದ ರಕ್ಷಣೆ.
ಕಾನೂನು ಪಾಲನೆ ಹಾಗೂ ಸುಲಭ ಸಂಚಾರಿ ಚಟುವಟಿಕೆಗೆ ಉತ್ತೇಜನ.
ಸಂಚಾರ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಕೋರಿರುವುದು ಏನೆಂದರೆ – “ಮಿತವಾದ ಶಬ್ದ, ಸುಗಮ ಸಂಚಾರ” ಎಂಬ ಜಾಗೃತಿ ಸಂದೇಶವನ್ನು ಬೆಂಬಲಿಸಿ, ಕಾನೂನಿಗೆ ವಿಧೇಯರಾಗಿರಿ.




