ದಾವಣಗೆರೆ, ಜುಲೈ 29: ತೆಂಗು ಬೆಳೆ ನಾಟಿ ಮಾಡುವ ರೈತರಿಗೆ ತೆಂಗು ಅಭಿವೃದ್ಧಿ ಮಂಡಳಿಯ ವತಿಯಿಂದ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಪ್ರಸ್ತುತ ಸಾಲಿನ ಯೋಜನೆಯಡಿ, ಹೊಸದಾಗಿ ತೆಂಗು ಬೆಳೆಯನ್ನು ನಾಟಿ ಮಾಡುವ ರೈತರಿಗೆ ಪ್ರತಿ ಹೆಕ್ಟೇರಿಗೆ ರೂ. 28,000/- ಸಹಾಯಧನ, ಮೂಡಣ ಮತ್ತು ನಂತರದ ವರ್ಷದಲ್ಲಿ ಒಟ್ಟು ರೂ. 56,000/- ರಷ್ಟು ಹಣವನ್ನು ನೀಡಲಾಗುತ್ತದೆ.
Join Whatsapp Group NammaDavangere 04
Join Whatsapp Group NammaDavangere 05
✅ ಸಹಾಯಧನ ಪಡೆಯಲು ಅರ್ಹತೆ:
- ಹೊಸದಾಗಿ ನಾಟಿ ಮಾಡಿದ ತೆಂಗು ಪ್ರದೇಶ ಮಾತ್ರ ಸಹಾಯಧನಕ್ಕೆ ಪರಿಗಣನೆಯಲ್ಲಿರುತ್ತದೆ.
- ಬದುಗಳ ಅಂಚುಗಳಲ್ಲಿ ನಾಟಿ ಮಾಡಿದ ಬೆಳೆಗಳಿಗೆ ಸಹಾಯಧನ ನೀಡಲಾಗದು.
📄 ಅಗತ್ಯವಿರುವ ದಾಖಲೆಗಳು:
- ಆಧಾರ್ ಕಾರ್ಡ್ ಜೆರಾಕ್ಸ್
- ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್
- ಅಧಿಕೃತ ಸಸ್ಯಾಗಾರದಿಂದ ಖರೀದಿಸಿದ ತೆಂಗು ಸಸಿಗಳ ಬಿಲ್
- ಅರ್ಜಿ ನಮೂನೆ
📍 ಸಂಪರ್ಕಿಸಲು:
- ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಬಹುದು
ಅಥವಾ - ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಯರನ್ನು ಸಂಪರ್ಕಿಸಬಹುದು.
ಬೆಳೆ ವಿಸ್ತರಣೆ ಮಾಡುವ ಉದ್ದೇಶದಿರುವ ರೈತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿನಂತಿಸಿದ್ದಾರೆ.





