
ನಮ್ಮ ದಾವಣಗೆರೆ: ದಾವಣಗೆರೆ ಯನ್ನು “ಕರ್ನಾಟಕ ದ ಮ್ಯಾಂಚೆಸ್ಟರ್” ಎಂದು ಕರೆಯುತ್ತಿದ್ದರು. ಈಗ ನಮ್ಮ ದಾವಣಗೆರೆಯನ್ನು ಬೆಣ್ಣೆ ನಗರಿ ಎಂದು ಕರೆಯಲಾಗುತ್ತಿದೆ.. ಏಕೆಂದರೆ ದಾವಣಗೆರೆ ಬೆಣ್ಣೆ ದೋಸೆ ವಿಶ್ವ ವಿಖ್ಯಾತಿ ಹೊಂದಿರುವುದೇ ಈ ಹೆಸರು ಬರಲು ಭಲವಾದ ಕಾರಣ. ಇದೇ ರೀತಿ ದಾವಣಗೆರೆ ಶಿಕ್ಷಣಕ್ಕೂ ಬಹಳಷ್ಟು ಹೆಸರುವಾಸಿಯಾಗಿದೆ.
ದಾವಣಗೆರೆಯಲ್ಲಿ ಮೆಡಿಕಲ್, ಎಂಜಿನೀರಿಂಗ್ ಹಾಗೂ ಇನ್ನೂ ಹೆಚ್ಚಿನ ಪ್ರೊಫೆಷನಲ್ ಕೋರ್ಸ್ ಕಾಲೇಜುಗಳು ಹೇರಳವಾಗಿವೆ, ಹಾಗಾಗಿ ದಾವಣಗೆರೆಯನ್ನು ಶಿಕ್ಷಣ ಕಾಶಿ ಎಂದು ಕರೆದರೆ ತಪ್ಪಾಗಲಾರದು. ದಾವಣಗೆರೆಯ ಜವಳಿ ನಗರದಲ್ಲಿರುವ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯೂ ಒಂದು “ಸೇಂಟ್ ಪಾಲ್ಸ್ ಸೆಂಟ್ರಲ್ ಸ್ಕೂಲ್ (CBSE)” ದಾವಣಗೆರೆಯ ಶಾಲೆಗಳಲ್ಲೇ ಅತ್ಯಂತ ಪ್ರಸಿದ್ಧ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಸಿಬಿಎಸ್ಇ (CBSE) ಶಾಲೆ.
ಸೇಂಟ್ ಪೌಲ್ಸ್ ಶಿಕ್ಷಣ ಸಂಸ್ಥೆ ನರ್ಸರಿ ಶಾಲೆಯನ್ನು 1946 ಅಕ್ಟೋಬರ್ 10 ರಂದು 6 ವಿದ್ಯಾರ್ಥಿಗಳೊಂದಿಗೆ ಪ್ರಾರಂಬಿಸಲಾಗಿತ್ತು, ಮಾರ್ಚ್ ಅಂತ್ಯದ ವೇಳೆಗೆ ವಿದ್ಯಾರ್ಥಿಗಳ ಸಂಖ್ಯೆ ಅರವತ್ತಕ್ಕೆ ಏರಿತು. ಜೂನ್ 1947 ರಲ್ಲಿ ದಾವಣಗೆರೆಯ ಶಿಕ್ಷಣ ಇಲಾಖೆಯಿಂದ ಸೂಕ್ತ ಅನುಮತಿಯೊಂದಿಗೆ ಕನ್ನಡ ಮಾಧ್ಯಮ ಪ್ರಾಥಮಿಕ ವಿಭಾಗವನ್ನು ತೆರೆಯಲಾಯಿತು.
ಸೇಂಟ್ ಪೌಲ್ಸ್ ಶಿಕ್ಷಣ ಸಂಸ್ಥೆಗಳು ಎಲ್ಲಾ ವರ್ಗಗಳ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿವೆ. 78 ವರ್ಷಗಳ ಅಸ್ತಿತ್ವದೊಂದಿಗೆ ಇದು ಆಡಳಿತಗಾರರು, ರಾಜಕಾರಣಿಗಳು, ಕಾನೂನು ಮತ್ತು ವೈದ್ಯಕೀಯ ವೃತ್ತಿಪರರು, ಎಂಜಿನಿಯರ್ಗಳು, ವೈದ್ಯರು ಮತ್ತು ಅತ್ಯುತ್ತಮ ಕ್ರೀಡಾಪಟುಗಳಂತಹ ಪ್ರಮುಖ ಮತ್ತು ಪ್ರಸಿದ್ಧ ಶಿಕ್ಷಣ ತಜ್ಞರನ್ನು ದೇಶದ ಸೇವೆಗೆ ಕೊಡುಗೆಯಾಗಿ ನೀಡಿದೆ.
ಸೇಂಟ್ ಪಾಲ್ಸ್ ಸಿಬಿಎಸ್ಇ (CBSE) ಶಾಲೆಗೆ ಕರೆ ಮಾಡಿ: 9019436511
ಸೇಂಟ್ ಪಾಲ್ಸ್ ಸಂಸ್ಥೆಗಳು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡನ್ನೂ ಹಾಗೂ ಅನುದಾನಿತ ಮತ್ತು ಅನುದಾನರಹಿತ ವಿಭಾಗಗಳನ್ನು ನಡೆಸುತ್ತದೆ. ಮತ್ತು 2019 ರಲ್ಲಿ ನಮ್ಮ ಸಂಸ್ಥೆ ಸಿಬಿಎಸ್ಇ (CBSE) ಪಠ್ಯಕ್ರಮ ಪ್ರಾರಂಭಿಸುವ ಮೂಲಕ ತನ್ನ ಕಿರೀಟಕ್ಕೆ ಹೊಸ ಗರಿ ಸೇರಿಸಿದ್ದೇವೆ.
ಸೇಂಟ್ ಪೌಲ್ಸ್ ಶಿಕ್ಷಣ ಸಂಸ್ಥೆ 06 ವರ್ಷದಿಂದ ಸಿಬಿಎಸ್ಇ (CBSE) ಪಠ್ಯಕ್ರಮ ದೊಂದಿಗೆ ಸೇಂಟ್ ಪೌಲ್ಸ್ ಸೆಂಟ್ರಲ್ ಶಾಲೆ ಯನ್ನು ಪ್ರಾರಂಭಿಸಿದೆ. ವಿನೂತನ ಪ್ರಯೋಗದೊಂದಿಗೆ ನಮ್ಮ ವಿದ್ಯಾರ್ಥಿಗಳು ಕ್ರೀಡೆ, ಸಾಮೂಹಿಕ ಡ್ರಿಲ್ಗಳು, ಖೋ-ಖೋ, ಥ್ರೋಬಾಲ್, ಬಾಸ್ಕೆಟ್ ಬಾಲ್, ಶಟಲ್-ಬ್ಯಾಡ್ಮಿಂಟನ್ನಲ್ಲಿ ಉತ್ತಮ ತರಬೇತಿ ಪಡೆದಿದ್ದಾರೆ.

ಸೇಂಟ್ ಪೌಲ್ಸ್ ಸೆಂಟ್ರಲ್ ಶಾಲೆ ಯ ದೈಹಿಕ ಶಿಕ್ಷಣ ತರಬೇತುದಾರರಾದ ಶ್ರೀ ಪ್ರವೀಣ್ ಎ. ಒ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳ ಕ್ರೀಡೆ ಗಳಲ್ಲಿ ತರಬೇತಿ ಪಡೆದಿದ್ದಾರೆ. ನಮ್ಮ ಅನೇಕ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಮಿಂಚುತ್ತಿದ್ದಾರೆ, ಹಾಗೂ ಓದಿನಲ್ಲೂ ನಮ್ಮ ಮಕ್ಕಳು ಮುಂದಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ ಎಂದು ಶಾಲಾ ಆಡಳಿತಾಧಿಕಾರಿ ಸಿಸ್ಟೆರ್ ಮೆಟಿಲ್ಡಾ ಮತ್ತು ಪ್ರಭಾರಿ ಪ್ರಾಂಶುಪಾಲ ರಾದ ನಿರ್ಮಲಾ ಎಸ್. ಬಿ. ರವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

