ನಮ್ಮ ದಾವಣಗೆರೆ ಆ. 26: ದಾವಣಗೆರೆಯ ಪ್ರತಿಷ್ಠಿತ ಸಂತ ಪೌಲರ ಸಿಬಿಎಸ್ಇ ಶಾಲೆ ದಸರಾ ಸಿಎಂ ಕಪ್ 2025 ಖೋ ಖೋ ಚಾಂಪಿಯನ್ಸ್ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಹಾಗೆಯೇ ಸಂತ ಪೌಲರ ಸಿಬಿಎಸ್ಇ ಶಾಲೆ 6 ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಮನ್ವಿತಾ ವಿ. ಭಾರಧ್ವಾಜ್ 1500 ಮೀಟರ್ ಓಟದಲ್ಲಿ 3 ನೇ ಸ್ಥಾನ ಗಳಿಸಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟೆರ್ ಸ್ಟೆಲ್ಲಾ ಮಾರಿಸ್, ಶಾಲೆಯ ದೈಹಿಕ ಶಿಕ್ಷಣ ತರಬೇತುದಾರರಾದ ಪ್ರವೀಣ್ ಎ. ಓ. ಹಾಗೂ ಸಿದ್ದೇಶ್ ರವರು ಇದೇ ರೀತಿ ಇನ್ನೂ ಹೆಚ್ಚಿನ ಸಾಧನೆಗಳು ಮುಂದುವರಿಯಲಿ ಎಂದು ಹಾರೈಸುತ್ತೇವೆ ಎಂದು ಮಕ್ಕಳಿಗೆ ಶುಭ ಕೋರಿದ್ದಾರೆ.





