ನಮ್ಮ ದಾವಣಗೆರೆ ಜೂಲೈ 25: ಕನ್ನಡ ರಂಗಭೂಮಿಯಲ್ಲಿ ಬಹುಮುಖ ಪ್ರತಿಭೆಯಾಗಿ, ನಿರಂತರ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಹಾಗೂ ನಿಷ್ಠೆಯೊಂದಿಗೆ ಸೇವೆ ಸಲ್ಲಿಸುತ್ತಿರುವ
ಆರ್. ಟಿ. ಅರುಣಕುಮಾರ್ ಅವರಿಗೆ 2025–26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ. ಆರ್.ಟಿ. ಅರುಣಕುಮಾರ್ ಅವರು ಅಪಘಾತ ಹಾಗೂ ಕ್ಯಾನ್ಸರ್ನಂತಹ ಜೀವಘಾತಕ ಸವಾಲುಗಳನ್ನು ಮಣಿಸಿ, ಮತ್ತೆ ಫೀನಿಕ್ಸ್ ನಂತೆ ಎದ್ದು ನಿಂತಿರುವ ಜೀವಂತ ಪ್ರೇರಣೆ.
Join Whatsapp Group NammaDavangere 04
Join Whatsapp Group NammaDavangere 05
🎬 ಕಲೆ ಅವರ ಜೀವನದ ಧ್ಯೇಯ:
ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರೂ, ಬಾಲ್ಯದಿಂದಲೂ ನಾಟಕದ ಸುತ್ತ ಮುತ್ತಲಿನಲ್ಲೇ ಬೆಳೆದ ಅರುಣಕುಮಾರ್ ರಂಗಭೂಮಿಯನ್ನೇ ಬದುಕಾಗಿ ರೂಪಿಸಿಕೊಂಡರು.
ಅವರ ದೊಡ್ಡಪ್ಪಂದಿರಾದ ಆರ್.ಜಿ. ಶಿವಕುಮಾರ ಹಾಗೂ ಆರ್.ಜಿ. ಗೌರಿಶಂಕರ ನಾಟಕ ಕ್ಷೇತ್ರದಲ್ಲಿ ದೊಡ್ಡ ಹೆಸರುಗಳು. ಅವರ ಪ್ರಭಾವದಿಂದಾಗಿ ಚಿಕ್ಕವಯಸ್ಸಿನಿಂದಲೇ ಗಚಟುವಟಿಕೆಯಲ್ಲಿ ತೊಡಗಿಸಿಕೊಂಡ ಅವರು, ಚಾರ್ಲಿ ಚಾಂಪ್ಲಿನ್ ಪಾತ್ರದಲ್ಲಿ ಜನಮನ ಗೆದ್ದಿದ್ದರು.
🎭 ಅಭಿನಯಿಸಿದ ಪ್ರಮುಖ ನಾಟಕಗಳು:
- ತದ್ರೂಪಿ
- ನಂದರಾಜ ಪ್ರಹಸನ
- ಈ ಮುಖದವರು
- ಹುಡುಕಾಟ
- ಅಂತಿ ಗೊನೆ
- ಸಿರಿಸಂಪಿಗೆ
- ಮುತ್ತಿಸಿಕೊಂಡವನು
- ಎದೆಗಾರಿಕೆ
- ಚಾರ್ಲಿ ಚಾಪ್ಲಿನ್
- ದಿ ಗ್ರೇಟ್ ಡಿಕ್ಟೇಟರ್
ಹೆತ್ತವರು, ದೊಡ್ಡಮ್ಮ, ದೊಡ್ಡಪ್ಪಂದಿರ ಆಶೀರ್ವಾದನನಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಖುಷಿಯಾಗಿದೆ. ಇದನ್ನು ನನ್ನ ತಂದೆ ಆರ್.ಜಿ.ತಾರಾನಾಥ, ತಾಯಿ ಹಾಲಮ್ಮ(ಸುಲೋಚನಮ್ಮ), ದೊಡ್ಡಪ್ಪಂದಿರಾದ ಆರ್.ಜಿ.ಶಿವಕುಮಾರ, ಆರ್.ಜಿ.ಗೌರಿಶಂಕರ, ದೊಡ್ಡಮ್ಮ ಚಂದ್ರಮ್ಮ ಶಿವಕುಮಾರ ಸೇರಿದಂತೆ ನನ್ನ ಕುಟುಂಬ ವರ್ಗ, ಸ್ನೇಹಿತರು, ಹಿತೈಷಿಗಳಿಗೆ ಅರ್ಪಿಸುತ್ತೇನೆ ಎಂದು ಆರ್.ಟಿ.ಅರುಣಕುಮಾರ ಪ್ರತಿಕ್ರಿಯಿಸಿದ್ದಾರೆ.




