ಮೈಸೂರು, ಆ.22 : ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮದ ದಿವಂಗತ ಹನುಮಂತಪ್ಪ ಹಾಗೂ ಶ್ರೀಮತಿ ಕಂಪಳಮ್ಮ ಇವರ ಪುತ್ರರಾದ ಡಾ. ಮಾರುತಿ ಹೆಚ್ ಅವರು ಕನ್ನಡ ನಾಡು–ನುಡಿ, ಜಲ–ಸಂಸ್ಕೃತಿ, ಸಾಹಿತ್ಯ–ಸಾಮಾಜಿಕ ಸಂಶೋಧನೆ, ಶಿಕ್ಷಣ, ಕೃಷಿ ಹಾಗೂ ಕಲೆಗಳ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅನುಪಮ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಾಧನೆಯ ಗೌರವವಾಗಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ, ಆಗಸ್ಟ್ 22ರಂದು ಶುಕ್ರವಾರ ಏರ್ಪಡಿಸಲಾದ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ, ಡಾ. ಮಾರುತಿ ಹೆಚ್ ಅವರಿಗೆ “ಕರ್ನಾಟಕ ಭೂಷಣ” ರಾಜ್ಯಮಟ್ಟದ ಸೇವಾರತ್ನ ಪ್ರಶಸ್ತಿ ಪ್ರಧಾನಿಸಲಾಯಿತು.
Join Whatsapp Group NammaDavangere 04
Join Whatsapp Group NammaDavangere 05
ಗಣ್ಯರ ಸಮ್ಮುಖದಲ್ಲಿ ಗೌರವ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಗೋವಿಂದ ಕೆ. ಮೇಲಗೇರಿ, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಹಿರಿಯ ಸಾಹಿತಿ ಡಾ. ಅಜನಾಳ ಭೀಮಾಶಂಕರ, ಜೊತೆಗೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಗೌರವ ಸ್ವೀಕರಿಸಿದ ನಂತರ ಮಾತನಾಡಿದ ಡಾ. ಮಾರುತಿ ಹೆಚ್ ಅವರು, “ಈ ಪ್ರಶಸ್ತಿ ನನ್ನ ವೈಯಕ್ತಿಕ ಸಾಧನೆಗೆ ಮಾತ್ರವಲ್ಲ, ನನ್ನ ಊರು, ನನ್ನ ಜನರು ಮತ್ತು ನನ್ನ ಕನ್ನಡ ನಾಡಿಗೆ ಸಿಕ್ಕಿರುವ ಗೌರವ. ಇನ್ನು ಮುಂದೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಹಿತ್ಯ–ಸಾಂಸ್ಕೃತಿಕ ಕೊಡುಗೆ
ಡಾ. ಮಾರುತಿ ಹೆಚ್ ಅವರು ಕನ್ನಡ ಭಾಷೆ, ನಾಡು–ನುಡಿ ಮತ್ತು ಜಲ ಸಂಸ್ಕೃತಿಯ ಅಧ್ಯಯನದಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ್ದಾರೆ. ಕೃಷಿ–ಶಿಕ್ಷಣ ಕ್ಷೇತ್ರಗಳಲ್ಲಿ ನೀಡಿರುವ ಮಾರ್ಗದರ್ಶನ, ಕಲೆ–ಸಾಹಿತ್ಯಗಳಲ್ಲಿ ತೋರಿದ ಆಸಕ್ತಿ, ಹಾಗೂ ಸಾಮಾಜಿಕ ಜಾಗೃತಿಗೆ ಮಾಡಿದ ಕೊಡುಗೆಗಳು ಗಮನಾರ್ಹ.
ಆಶೀರ್ವಾದದ ನುಡಿಗಳು
ಸಮಾರಂಭದಲ್ಲಿ ಭಾಗವಹಿಸಿದ ಗಣ್ಯರು “ಡಾ. ಮಾರುತಿ ಹೆಚ್ ಅವರ ಸೇವೆಯ ಹಾದಿ ಹೀಗೆ ಮುಂದುವರಿಯಲಿ, ಇನ್ನಷ್ಟು ಉನ್ನತ ಪ್ರಶಸ್ತಿಗಳನ್ನು ಗಳಿಸಲಿ” ಎಂದು ಹಾರೈಸಿದರು.



