ಬಿಜೆಪಿ ಕಾಲದ 21 ಹಗರಣಗಳ ತನಿಖೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಬಿಜೆಪಿ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಹಗರಣಗಳಿವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 42.16 ಕೋಟಿ ರೂ. ಎಪಿಎಂಸಿ ದೊಡ್ಡ ಹಗರಣವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಭೋವಿ ನಿಗಮಕ್ಕೆ 87 ಕೋಟಿ ರೂ. ಹಗರಣ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಸಂಸದರು ಕಾಂಗ್ರೆಸ್ ಮೇಲೆ ಟೀಕೆ ಮಾಡುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಗರಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಭೋವಿ ನಿಗಮದ 87 ಕೋಟಿ ರೂ. ಅದೊಂದು ಹಗರಣ. ದೇವರಾಜು ಅರಸ್ ಟ್ರಕ್ ಟರ್ಮಿನಲ್‌ನಲ್ಲಿ 47.10 ಕೋಟಿ ರೂ. ಅದು ಇನ್ನೊಂದು ಹಗರಣ. ಅದಕ್ಕೆ ತಾನೇ ಆಗಿನ ಅಧ್ಯಕ್ಷರಾಗಿದ್ದ ವೀರಯ್ಯ ಬಂಧನವಾಗಿದ್ದರು ನಿಮ್ಮ ಯೋಗ್ಯತೆಗೆ ನಿಮಿಗೆ ನಾಚಿಕೆ ಆಗಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಹಗರಣದಲ್ಲಿ ಬಡವರ ಹಾಗೂ ಹಿಂದುಳಿದ ಜನರ ಕೋಟ್ಯಂತರ ರೂಪಾಯಿ ಲೂಟಿಮಾಡಿದ್ದೀರಿ ಆದರೆ ಇಡಿ, ಐಟಿ ಮತ್ತು ಸಿಬಿಐ ಲೂಟಿಕೋರರನ್ನು ಬಂಧಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಜಯನಗರ ಮತ್ತು ಬಸವನಗುಡಿಯಲ್ಲಿ ಬೀದಿ ಬದಿಯ ಕೆಲ ಕಳ್ಳರು ಹಾಗೂ ದರೋಡೆಕೋರರು ವಿಧಾನಸೌಧ, ಸಂಸತ್ ಗೂ ಆಯ್ಕೆಯಾಗಿ ಹೋಗಿದ್ದಾರೆ, ನಿಮಗೆ ನಾಚಿಕೆ ಆಗಬೇಕು ಎಂದರು.

ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧದ ಭೂ ವಂಚನೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ, ಕೃಷಿ ಇಲಾಖೆ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಕೃಷಿ ಸಚಿವರಾಗಿದ್ದ ಬಿ. ಸಿ. ಪಾಟೀಲ್ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಇತರೆ ನಿಗಮಗಳಲ್ಲಿ 437 ಕೋಟಿ ರೂ. ಹಗರಣವಾಗಿದೆ. ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಸಚಿವರಾಗಿದ್ದಾಗ ಕಿಯೋನಿಕ್ಸ್ ನಲ್ಲಿ 500 ಕೋಟಿ ರೂ. ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಕರ್ನಾಟಕ ಬಿಜೆಪಿ ಭ್ರಷ್ಟಾಚಾರದ ಪಿತಾಮಹ. ನಮ್ಮ ಹಗರಣಗಳು ಬಯಲಾಗಬಾರದು ಎಂದು ಸಧನದಲ್ಲಿ ಗಲಾಟೆ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷಗಳು ಇಷ್ಟು ಕೆಟ್ಟದಾಗಿ ನಡೆದುಕೊಂಡಿದ್ದನ್ನು ನಾನು ನೋಡಿಲ್ಲ. ಕೇಂದ್ರ ಹಾಗೂ ಆರ್‌ಎಸ್‌ಎಸ್ ಪ್ರಚೋದನೆಯಿಂದ ಕೇವಲ ಪ್ರಚಾರಕ್ಕಾಗಿ ಕರ್ನಾಟಕ ಬಿಜೆಪಿ ಇಂತಹ ಗಲಾಟೆ ಮಾಡುತ್ತಿದ್ದಾರೆ.
ಬಿಜೆಪಿ ಕಾಲದ 21 ಹಗರಣಗಳ ತನಿಖೆ ಮಾಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Related Posts

ಯಾವೆಲ್ಲಾ ಜಾತಿಗಳ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು..?

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಚರ್ಚಿಸಲಾಯಿತು. ಒಬಿಸಿ ಮೀಸಲಾತಿ ಹೆಚ್ಚಿಸುವಂತೆ ಜಯಪ್ರಕಾಶ್ ಹೆಗ್ಡೆ ಆಯೋಗದಿಂದ ಶಿಫಾರಸು ಮಾಡಲಾಗಿದೆ ಎಂಬ ಸುದ್ದಿ ಇದೆ. ಒಬಿಸಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಶಿಫಾರಸು ಮಾಡಲಾಗುತ್ತಿದೆ. ಜನಸಂಖ್ಯೆ ಆಧಾರದ…

ಏಪ್ರಿಲ್ 16, 17 ರಂದು ಸಿಇಟಿ ಪರೀಕ್ಷೆ; ಶೂಗಳು, ಕಿವಿಯೋಲೆ, ಉಂಗುರ, ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.

ದಾವಣಗೆರೆ ಏ.11: ಸಿಇಟಿ-2025 ರ ಪರೀಕ್ಷೆಯು ಏಪ್ರಿಲ್ 16 ಮತ್ತು 17 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆಯಲ್ಲಿ 28 ಕೇಂದ್ರಗಳಲ್ಲಿ 12875 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲಾ ಕೇಂದ್ರಗಳ ಪ್ರಾಂಶುಪಾಲರು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ…

Leave a Reply

Your email address will not be published. Required fields are marked *

You Missed

ಮಾವು, ಹಲಸು ಮತ್ತು ಇತರೆ ಹಣ್ಣುಗಳು ಪ್ರದರ್ಶ ಮತ್ತು ಮಾರಾಟ ಮೇಳ

  • By admin
  • June 14, 2025
  • 46 views
ಮಾವು, ಹಲಸು ಮತ್ತು ಇತರೆ ಹಣ್ಣುಗಳು ಪ್ರದರ್ಶ ಮತ್ತು ಮಾರಾಟ ಮೇಳ

ಭಾನುವಾರದ ರಾಶಿ ಭವಿಷ್ಯ 15 ಜೂನ್ 2025

  • By admin
  • June 14, 2025
  • 6 views
ಭಾನುವಾರದ ರಾಶಿ ಭವಿಷ್ಯ 15 ಜೂನ್ 2025

ಶನಿವಾರದ ರಾಶಿ ಭವಿಷ್ಯ 14 ಜೂನ್ 2025

  • By admin
  • June 13, 2025
  • 27 views
ಶನಿವಾರದ ರಾಶಿ ಭವಿಷ್ಯ 14 ಜೂನ್ 2025

ಶುಕ್ರವಾರದ ರಾಶಿ ಭವಿಷ್ಯ 13 ಜೂನ್ 2025

  • By admin
  • June 13, 2025
  • 32 views
ಶುಕ್ರವಾರದ ರಾಶಿ ಭವಿಷ್ಯ 13 ಜೂನ್ 2025

ಗುರುವಾರದ ರಾಶಿ ಭವಿಷ್ಯ 12 ಜೂನ್ 2025

  • By admin
  • June 11, 2025
  • 47 views
ಗುರುವಾರದ ರಾಶಿ ಭವಿಷ್ಯ 12 ಜೂನ್ 2025

ಬುಧವಾರದ ರಾಶಿ ಭವಿಷ್ಯ 11 ಜೂನ್ 2025

  • By admin
  • June 10, 2025
  • 50 views
ಬುಧವಾರದ ರಾಶಿ ಭವಿಷ್ಯ 11 ಜೂನ್ 2025

ಮಂಗಳವಾರದ ರಾಶಿ ಭವಿಷ್ಯ 10 ಜೂನ್ 2025

  • By admin
  • June 10, 2025
  • 69 views
ಮಂಗಳವಾರದ ರಾಶಿ ಭವಿಷ್ಯ 10 ಜೂನ್ 2025

ಸೋಮವಾರದ ರಾಶಿ ಭವಿಷ್ಯ 09 ಜೂನ್ 2025

  • By admin
  • June 8, 2025
  • 86 views
ಸೋಮವಾರದ ರಾಶಿ ಭವಿಷ್ಯ 09 ಜೂನ್ 2025

ಶನಿವಾರದ ರಾಶಿ ಭವಿಷ್ಯ 07 ಜೂನ್ 2025

  • By admin
  • June 6, 2025
  • 89 views
ಶನಿವಾರದ ರಾಶಿ ಭವಿಷ್ಯ 07 ಜೂನ್ 2025

ಶುಕ್ರವಾರದ ರಾಶಿ ಭವಿಷ್ಯ 06 ಜೂನ್ 2025

  • By admin
  • June 6, 2025
  • 100 views
ಶುಕ್ರವಾರದ ರಾಶಿ ಭವಿಷ್ಯ 06 ಜೂನ್ 2025
×