ಪಂಚೆಯುಟ್ಟು ಬಂದಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನ ಮಾಡಿದ್ದಕ್ಕೆ ಅವಮಾನಿಸಿದ್ದ ಸಿಬ್ಬಂದಿ ಹಾಗೂ ಜಿಟಿ ಮಾಲ್ ಆಡಳಿತ ಮಂಡಳಿ ಕ್ಷಮೆಯಾಚಿಸಿದೆ, ಹಾಗೆಯೇ ರೈತನಿಗೆ ಶಾಲು ಮತ್ತು ಹೂವಿನ ಹಾರ ಹಾಕಿ ಗೌರವಿಸಿದೆ.
ನಿನ್ನೆ ರೈತ ಫಕೀರಪ್ಪರನ್ನು ಜಿಟಿ ಮಾಲ್ಗೆ ಪ್ರವೇಶ ನಿರಾಕರಿಸಿ ಅವಮಾನ ಮಾಡಲಾಗಿತ್ತು. ಫಕೀರಪ್ಪ ಅವರನ್ನು ಇಂದು ಇದೇ ಮಾಲ್ನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಅವರು ಶಾಲು ಮತ್ತು ಹೂವಿನ ಹಾರ ಹಾಕಿ ಗೌರವಯುತವಾಗಿ ಸನ್ಮಾನಿಸಿದರು..
ರೈತನನ್ನು ಪ್ರವೇಶಿಸಲು ನಿರಾಕರಿಸಿ ಅವರನ್ನು ಅವಮಾನಿಸಿದ್ದರಿಂದ ಜಿಟಿ ಮಾಲ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿತ್ತು. ಮಾಲ್ ನ ಮುಂದೆ ರೈತ ಸಂಘಟನೆಗಳು ಮತ್ತು ಕನ್ನಡ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.




