ನಮ್ಮ ದಾವಣಗೆರೆ, ಜುಲೈ 26 – ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆಯನ್ನು ಖಂಡಿಸಿ ರೈತ ಮುಖಂಡರು ಟೈರ್ಗೆ ಬೆಂಕಿ ಹಾಕಿ ರಸ್ತೆ ಮಧ್ಯೆ ಪ್ರತಿಭಟಿಸಿದರು. ಈ ಸಂಬಂಧ ಸಾರ್ವಜನಿಕರು 112 ನಂಬರಿಗೆ ಕರೆ ನೀಡಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಹಠಾತ್ ಪ್ರತಿಭಟನೆಗೆ ಕಾರಣ:
ಗೊಬ್ಬರದ ಲಭ್ಯತೆ ಕಡಿಮೆಯಿರುವ ಹಿನ್ನೆಲೆಯಲ್ಲಿ ರೈತರು ಯೂರಿಯಾ ಗೊಬ್ಬರ ಕೊರತೆಯನ್ನು ಖಂಡಿಸಿ ರಸ್ತೆಯಲ್ಲಿ ಟೈರ್ಗಳನ್ನು ಸುತ್ತು ಪ್ರತಿಭಟನೆ ನಡೆಸಿದರು. ಈ ಸಂದರ್ಭ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿ ಜನರಲ್ಲಿ ಆತಂಕ ಮೂಡಿತ್ತು.
112 ಹೊಯ್ಸಳ ಪಡೆ ಆಗಮನ:
ದೂರು ಸ್ವೀಕರಿಸಿದ ಕೆಲ ನಿಮಿಷಗಳಲ್ಲೇ 112 ಹೊಯ್ಸಳ ಪೊಲೀಸ್ ವಾಹನ ಸ್ಥಳಕ್ಕೆ ತುರ್ತುಗಿ ಬೇಟಿ ನೀಡಿ, ರೈತರೊಂದಿಗೆ ಚರ್ಚೆ ನಡೆಸಿ ಸೂಕ್ತ ಮಾಹಿತಿ ಮತ್ತು ಶಾಂತಿಯುತ ನಿರ್ವಹಣೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಂಚಾರ ಸುಗಮ:
ಪೊಲೀಸರು ಸ್ಥಳೀಯ ರೈತ ಮುಖಂಡರೊಂದಿಗೆ ಮಾತನಾಡಿ ಸಮಸ್ಯೆಯನ್ನು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು. ಇದರಿಂದಾಗಿ ರೈತರು ಪ್ರತಿಭಟನೆ ನಿಲ್ಲಿಸಿ ಸಹಕಾರ ನೀಡಿದ ಕಾರಣ, ರಸ್ತೆ ಸಂಚಾರ ಸುಗಮವಾಗಿ ಪುನರಾರಂಭವಾಯಿತು.
ಸೂಚನೆ:
ರೈತರಿಗೆ ಗೊಬ್ಬರ ಮತ್ತು ಇತರ ಕೃಷಿ ಸರಕಿನ ಲಭ್ಯತೆ ಬಗೆಗೆ ಯಾವುದೇ ತೊಂದರೆ ಎದುರಾದಲ್ಲಿ ಅಧಿಕಾರಿಗಳ ಗಮನಕ್ಕೆ ತರುವುದು ಶ್ರೇಯಸ್ಕರ. ಕಾನೂನುಬಾಹಿರ ಕ್ರಮಗಳನ್ನು ಕೈಕೊಳ್ಳದಂತೆ ಸಹಕಾರ ನೀಡುವುದು ಅನಿವಾರ್ಯ.



