ದಾವಣಗೆರೆ: ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ನೈಜೀರಿಯಾ ಪ್ರಜೆಗಳು ಸೇರಿದಂತೆ ಐವರ ಬಂಧನ

ದಾವಣಗೆರೆ, ಜುಲೈ 26 – ನಗರದ ಹೊರವಲಯದ ಬಾಡಾ ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಮೂಲದ ವ್ಯಕ್ತಿಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸೇರಿ ಒಟ್ಟು ಐವರು ಬಂಧನಕ್ಕೊಳಗಾಗಿದ್ದಾರೆ. ಸಿಇಎನ್ ಪೊಲೀಸ್‌ ಠಾಣೆಯ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತರ ವಿವರ:

  • ಪ್ಯಾಟ್ರಿಕ್ (44),
  • ಪ್ರಾಮೇಸೆ (42) – ಇಬ್ಬರೂ ನೈಜೀರಿಯಾ ಪ್ರಜೆಗಳು
  • ಮೊಹಮ್ಮದ್ ಬಿಲಾಲ್ (29)
  • ಸೈಯದ್ ಜಾಬೀರ್ (31) – ಬೆಂಗಳೂರಿನ ನಿವಾಸಿಗಳು
  • ಕಲ್ಯಾಣ್ (24) – ದಾವಣಗೆರೆಯ ಖಾಸಗಿ ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ

Join Whatsapp Group NammaDavangere 04
Join Whatsapp Group NammaDavangere 05

ಕಾರಿನಲ್ಲಿ ಡ್ರಗ್ಸ್ ಮಾರಾಟ:

ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕಾರಿನಲ್ಲಿ ಕುಳಿತು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಐವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 13 ಗ್ರಾಂ ಎಂಡಿಎಂಎ ಡ್ರಗ್ (MDMA), 6 ಮೊಬೈಲ್ ಫೋನ್‌ಗಳು ಮತ್ತು ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳೇ ಗುರಿ:

ಈ ಗ್ಯಾಂಗ್‌ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ಸಿಗರೇಟ್‌ನಲ್ಲಿ ಡ್ರಗ್ಸ್ ತುಂಬಿಸಿ ಮಾರಾಟ ಮಾಡುತ್ತಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಈ ತಂಡ, ದಾವಣಗೆರೆಯಲ್ಲಿ ಕಲ್ಯಾಣ್ ಎಂಬ ವೈದ್ಯಕೀಯ ವಿದ್ಯಾರ್ಥಿಗೆ ಡ್ರಗ್ಸ್ ಪೂರೈಕೆಗಾಗಿ ಬಂದಿದ್ದಾಗ ಬಂಧಿಸಲಾಗಿದೆ.

ತೀವ್ರ ತನಿಖೆ ಆರಂಭ:

ಈ ಡ್ರಗ್ಸ್ ಪೆಡ್ಲಿಂಗ್ ಜಾಲದ ಹಿನ್ನೆಲೆ, ಬೆನ್ನಟ್ಟಿ ನಗರದಲ್ಲಿ ಇತರ ಡ್ರಗ್ಸ್ ವಹಿವಾಟುದಾರರ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಲಾಗಿದೆ.

ಸೂಚನೆ:
ಯುವ ಸಮುದಾಯದ ಭವಿಷ್ಯ ಹಾಳು ಮಾಡುತ್ತಿರುವ ಈ ರೀತಿಯ ಡ್ರಗ್ಸ್ ಜಾಲವನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು.

Related Posts

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ನಮ್ಮ ದಾವಣಗೆರೆ ಸೆ.10: ಸ್ಪ್ಯಾಮ್ (SPAM) ಎಷ್ಟು ವ್ಯಾಪಕವಾಗಿದೆ? “ಅಧ್ಯಯನಗಳ ಪ್ರಕಾರ, ಬಳಕೆದಾರರು ಸ್ವೀಕರಿಸುವ ಒಟ್ಟು ಇ-ಮೇಲ್‌ಗಳಲ್ಲಿ ಸುಮಾರು ಅರ್ಧದಷ್ಟು ಇ-ಮೇಲ್‌ಗಳು ಯಾವುದೇ ಆಹ್ವಾನ ಅಥವಾ ಬೇಡಿಕೆ ಇಲ್ಲದೆ ಕಳುಹಿಸಲಾಗುವ ‘ಜಂಕ್ ಇ-ಮೇಲ್‌ಗಳು’ ಅಥವಾ ಸ್ಪ್ಯಾಮ್ ಆಗಿವೆ. ಒಂದು ಕಾಲದಲ್ಲಿ ಸ್ಪ್ಯಾಮ್…

ಐಫೋನ್ ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಎಲ್ಲರ ಮನಸ್ಸನ್ನು ಕಲಕುವಂತಿದೆ. “ಐಫೋನ್ ಕೊಡಿಸಲಿಲ್ಲ ಎಂದು ಯುವಕ ಸಾವಿಗೆ ಶರಣು, ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಬಲಿ” ಎಂಬ ಶೀರ್ಷಿಕೆ ಕೇಳಿದರೆ ಯಾರಿಗಾದರೂ ಆಘಾತವಾಗುತ್ತದೆ.ಒಂದು ಮೊಬೈಲ್ ಫೋನ್ಗಾಗಿ ಇಡೀ ಕುಟುಂಬವೇ…

Leave a Reply

Your email address will not be published. Required fields are marked *

You Missed

ಭಾನುವಾರದ ರಾಶಿ ಭವಿಷ್ಯ 13 ಸೆಪ್ಟೆಂಬರ್ 2026

ಭಾನುವಾರದ ರಾಶಿ ಭವಿಷ್ಯ 13 ಸೆಪ್ಟೆಂಬರ್ 2026

ಶನಿವಾರದ ರಾಶಿ ಭವಿಷ್ಯ 12 ಸೆಪ್ಟೆಂಬರ್ 2026

ಶನಿವಾರದ ರಾಶಿ ಭವಿಷ್ಯ 12 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 11 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 11 ಸೆಪ್ಟೆಂಬರ್ 2026

ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ಗುರುವಾರದ ರಾಶಿ ಭವಿಷ್ಯ 10 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 10 ಸೆಪ್ಟೆಂಬರ್ 2026

ಬುಧವಾರದ ರಾಶಿ 09 ಸೆಪ್ಟೆಂಬರ್ 2026

ಬುಧವಾರದ ರಾಶಿ 09 ಸೆಪ್ಟೆಂಬರ್ 2026

ಸೆ.9 ನಾಳೆಯಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ 2026

ಸೆ.9 ನಾಳೆಯಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ 2026

ಮಂಗಳವಾರದ ರಾಶಿ ಭವಿಷ್ಯ 08 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 08 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 07 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 07 ಸೆಪ್ಟೆಂಬರ್ 2026
×