ನಮ್ಮ ದಾವಣಗೆರೆ, ಜುಲೈ 21: ಕರ್ನಾಟಕ ಮೀನುಗಾರಿಕೆ ಇಲಾಖೆ ಪ್ರಸಕ್ತ ಸಾಲಿನಲ್ಲಿ ಫಲಾನುಭವಿ ಆಧಾರಿತ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ಮೀನುಗಾರ ಸಮುದಾಯದ ಪ.ಜಾತಿ ಮತ್ತು ಪ.ಪಂಗಡದ ಅರ್ಹ ಫಲಾನುಭವಿಗಳು ಈ ಯೋಜನೆಗಳಿಂದ ಲಾಭ ಪಡೆಯಲು ಆಗಸ್ಟ್ 20ರೊಳಗಾಗಿ ಅರ್ಜಿ ಸಲ್ಲಿಸಬಹುದು.

📌 ಲಭ್ಯವಿರುವ ಪ್ರಮುಖ ಯೋಜನೆಗಳು:
1️⃣ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣಾ ಯೋಜನೆ.
2️⃣ ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಯೋಜನೆ.
3️⃣ ಮತ್ಸ್ಯವಾಹಿನಿ (Fish Transport Vehicle) ಖರೀದಿಗೆ ಸಹಾಯ.
4️⃣ ಮೀನು ಮಾರಾಟ ವಾಹನಕ್ಕಾಗಿ ಆರ್ಥಿಕ ಸಹಾಯ ಯೋಜನೆ.
Join Whatsapp Group NammaDavangere 04
Join Whatsapp Group NammaDavangere 05
📝 ಅರ್ಜಿ ಸಲ್ಲಿಕೆ ವಿವರ:
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 20 ಆಗಸ್ಟ್ 2025.
ಅರ್ಜಿ ಸಲ್ಲಿಸಬೇಕಾದ ಸ್ಥಳ: ತಾಲ್ಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ
ಅರ್ಜಿ ಸಲ್ಲಿಸಲು ಪ.ಜಾತಿ ಮತ್ತು ಪ.ಪಂಗಡ ಮೀನುಗಾರರು ಮಾತ್ರ ಅರ್ಹರಾಗಿರಬೇಕು
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
📞 ಸಂಪರ್ಕಿಸಿ:
ಮೀನುಗಾರಿಕೆ ಉಪನಿರ್ದೇಶಕರ ಕಚೇರಿ,
ದಾವಣಗೆರೆ ಜಿಲ್ಲೆ.



